ಡಾ|| ರಾಜ್ ಕುಮಾರ್, ಬೆಂಗಳೂರು ಲತಾ
ಚಿ. ಉದಯಶಂಕರ್
ರಂಗರಾವ್

ಏಕೋ ಏನೋ ಈ ನನ್ನ ಮನವು

ಉಯ್ಯಾಲೆಯಾಗಿ ತೂಗಿದೆ

ಎಂದೂ ಕಾಣೆ ನೂರೆಂಟು ಬಯಕೆ

ಹೊಸ ರಾಗವನ್ನು ಹಾಡಿದೆ|| ಪ ||

ಬಿಸಿಲಾದರೇನು ಮಳೆಯಾದರೇನು

ಇಂದೇಕೊ ನಾಕಾಣೆ ಹಾಯಾಗಿದೆ

ಹೂವಾದರೇನು ಮುಳ್ಳಾದರೇನು

ಇಂದೇಕೊ ನನಗೆಲ್ಲ ಸೋಗಸಾಗಿದೆ

ಎದೆಯಲ್ಲಿ ಸಂತೋಷ ಕಡಲಾಗಿದೆ

ಮನದಲ್ಲಿ ಹೊಸ ಆಸೆ ಕುಣಿದಾಡಿದೆ|| 1 ||

ಬದುಕೆಲ್ಲ ಹೀಗೆ ಉಲ್ಲಾಸದಿಂದ

ಒಂದಾಗಿ ಇರುವಾಸೆ ನನಗಾಗಿದೆ

ಅನುರಾಗ ತಂದ ಆನಂದದಿಂದ

ಈ ಬಾಳ ಸಂಗೀತ ಹಿತವಾಗಿದೆ

ಮಾತಾಡೊ ಮಾತೆಲ್ಲ ಸೊಗಸಾಗಿದೆ

ಇಂದೇಕೊ ನನಗೆಲ್ಲ ಹೊಸದಾಗಿದೆ|| 2 ||

ಜ್ವಾಲಾಮುಖಿ

ಚಿತ್ರ ನೋಡಿ